ನ್ಯೂಸ್ ನಾಟೌಟ್: ಕೆಲವು ಬಸ್ ಕಂಡೆಕ್ಟರ್ ಪ್ರಯಾಣಿಕರು ಚಿಲ್ಲರೆ ಕೊಡಲಿಲ್ಲ ಎಂದು ಗೊಣಗುವುದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಕಂಡೆಕ್ಟರ್ ಮಡಿಕೇರಿಯಿಂದ ಮಂಗಳೂರು ಕಡೆಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರನ್ನು ಸುಳ್ಯದ ಅಡ್ಕಾರು ಬಳಿ ಬಸ್ಸಿನಿಂದ ಇಳಿಸಿ ಹೋದ ಅಮಾನವೀಯ ಘಟನೆ ಜ.19 ರಂದು ನಡೆದಿದೆ.
ಮಡಿಕೇರಿಯಿಂದ ಮಂಗಳೂರಿಗೆ ಕೆ ಎ 21 ಎಫ್ 0060 ಬಸ್ಸಿನಲ್ಲಿ ಉತ್ತರ ಭಾರತ ಮೂಲದ ಕಾರ್ಮಿಕರು ಪ್ರಯಾಣಿಸುತ್ತಿದ್ದರು. ಈ ವೇಳೆ ಅವರು ಮಂಗಳೂರಿಗೆ ಟಿಕೇಟ್ ಪಡೆದಿದ್ದರು. ಸಣ್ಣ ಮಕ್ಕಳಿಗೂ ಟಿಕೇಟ್ ಪಡೆಯಲಾಗಿತ್ತು. ಆದರೆ ಕಂಡೆಕ್ಟರ್ ನಮ್ಮನ್ನು ಅರ್ಧ ದಾರಿಯಲ್ಲಿ ಬಸ್ಸಿನಿಂದ ಇಳಿಸಿ ಹೋಗಿದ್ದಾರೆ ಎಂದು ಆರೋಪಿಸಲಾಗಿದೆ. ಪುಟ್ಟ ಮಕ್ಕಳಿದರೂ ಕಂಡೆಕ್ಟರ್ ಕರುಣೆ ತೋರಿಸದೆ ಬಸ್ ನಿಂದ ಕೆಳಕ್ಕೆ ಇಳಿಸಿದ್ದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ರಸ್ತೆ ಬದಿಯಲ್ಲಿ ಕಣ್ಣೀರಿಡುತ್ತಾ ಕುಳಿತಿದ್ದವರನ್ನುಸ್ಥಳಿಯರಾದ ಜಯರಾಮ್ ಅಡ್ಕಾರ್ ಮತ್ತು ಸುಬ್ರಮಣ್ಯ ಪ್ರಸಾದ್ ನೇತೃತ್ವದಲ್ಲಿ ವಾಪಸ್ ಮಂಗಳೂರು ಗೆ ಕಳುಹಿಸಿ ಕೊಡಲಾಯಿತು.



















The conductor has followed the KSRTC rules. They are not north Indians but eith Rohingyas or Bangladeshi migrants. Donot discourage them. Let them go to their native land. See what is happening to Hindus in Pakistan, Bangladesh & Af. No mercy.