ನ್ಯೂಸ್ ನಾಟೌಟ್ : ತುಳುನಾಡಿನ ಕಾರ್ಣಿಕದ ಶಕ್ತಿ ಸ್ವಾಮಿ ಕೊರಗಜ್ಜ. ಅಜ್ಜನ ಮಹಾ ಶಕ್ತಿಗೆ ಅಂತ್ಯವಿಲ್ಲ. ಸ್ವಾಮಿ ಕೊರಗಜ್ಜ ಅಂತ ಹೆಸರು ಕೇಳಿದ್ರೆನೇ ಜನರಲ್ಲಿ ಒಂದು ರೀತಿಯ ಭಯ-ಭಕ್ತಿ ಮೂಡುತ್ತದೆ. ಕುತ್ತಾರಿನ ಒಡೆಯ ಸ್ವಾಮಿ ಕೊರಗಜ್ಜ ತುಳುನಾಡಿನ ಹಲವು ಕ್ಷೇತ್ರಗಳಲ್ಲಿ ನೆಲೆನಿಂತಿದ್ದಾರೆ. ನಂಬಿ ಬಂದ ಭಕ್ತರ ಕಷ್ಟನಷ್ಟಗಳ ಪರಿಹರಿಸುವ ಆರಾಧ್ಯ ದೈವವಾಗಿದ್ದಾರೆ. ಅಂತಹ ದೈವಕ್ಕೆ ಇತ್ತೀಚಿನ ದಿನಗಳಲ್ಲಿ ಕೆಲವರು ಅಪಚಾರ ಎಸಗುತ್ತಿದ್ದಾರೆ. ಅಜ್ಜನ ಹೆಸರಲ್ಲಿ ಸಂಬಂಧವಿಲ್ಲದ ಸ್ಥಳಗಳಲ್ಲಿ ದೈವ ಸ್ಥಾನ ಕಟ್ಟಿಕೊಂಡು ಹಣ ದೋಚಿದವರ ಸುದ್ದಿಗಳು ಜಾಲತಾಣಗಳಲ್ಲಿ ಹರಿದಾಡಿದ್ದವು. ಇದೀಗ ತುಳುನಾಡಿನಲ್ಲೂ ಅಜ್ಜನ ಹೆಸರಲ್ಲಿ ಕೋಟಿ..ಕೋಟಿ ಹಣ ಲೂಟಿ ಹೊಡೆದಿದ್ದಾರೆ ಅನ್ನುವ ಸುದ್ದಿ ಸ್ಫೋಟಗೊಂಡಿದೆ. ಸ್ವತಃ ದೈವ ನರ್ತಕನೇ ಇಂತಹ ಕೃತ್ಯ ಎಸಗಿರುವುದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಜಾಲತಾಣದಲ್ಲಿ ಮಂಗಳೂರಿನ ದೈವ ನರ್ತಕ ಭಾಸ್ಕರ ಬಂಗೇರ ಎಂಬ ವ್ಯಕ್ತಿ ಅಮಾಯಕರಿಂದ ಅಜ್ಜನ ಹೆಸರಲ್ಲಿ ಮೋಸ ಮಾಡುತ್ತಿದ್ದಾನೆ ಎನ್ನಲಾಗುತ್ತಿದೆ. ಜ್ಯೋತಿಷಿಯಂತೆ ನಾಟಕವಾಡಿಕೊಂಡು ಇಬ್ಬರು ಏಜೆಂಟರ ಮೂಲಕ ಭಕ್ತರನ್ನು ಕರೆಸಿಕೊಳ್ಳುವುದು, ಅವರಿಂದ ನಿಮ್ಮ ದೋಷಗಳ ಪರಿಹಾರಕ್ಕೆ ಅಜ್ಜನಿಗೆ ದುಬಾರಿ ವಸ್ತುಗಳನ್ನು ಹರಕೆಯಾಗಿ ನೀಡಬೇಕು ಎಂದು ಹೇಳುತ್ತಿದ್ದ. ಪ್ರಶ್ನೆ, ಕವಡೆ, ಕೋಲ, ದರ್ಶನ ಮೂಲಕ ಅಮಾಯಕರನ್ನು ಭಾರಿ ಸುಲಿಗೆ ಮಾಡುತ್ತಿದ್ದರು ಎಂದು ದೂರಲಾಗಿದೆ. ಕೊರಗಜ್ಜನ ಹೆಸರು ಹೇಳಿ ಜನರನ್ನು ಆಕರ್ಷಿಸಲು ಮತ್ತು ಕರೆತರಲು ಲತಾ ಮತ್ತು ಪದ್ಮಿನಿ ಎನ್ನುವ ಇಬ್ಬರು ಏಜೆಂಟ್ ಗಳಿದ್ದಾರೆ. ಒಂದು ಕೋಲಕ್ಕೆ ಲಕ್ಷಾಂತರ ರೂಗಳನ್ನು ಪಡೆಯುತ್ತಿದ್ದಾನೆ .ಸ್ವಾಮಿ ಕೊರಗಜ್ಜನಿಗೆ ಇಷ್ಟವಾದ ಸೇವೆಗಳ ಬೇರೇ ರೀತಿಯಲ್ಲಿ ಬದಲಾವಣೆ ಮಾಡಿದ್ದಾನೆ. ಕೋಲ ಸೇವೆಗೆ ತಲಾ ೧ ಲಕ್ಷ, ಅಗಲು ಸೇವೆಗೆ ೭೫೦ , ಕೊಳಲು ಸೇವೆಗೆ ೫೦೦೦, ತೊಟ್ಟಿಲ ಬಾಲೆ ಸೇವೆಗೆ ೧೦೦೦೦ ರೂಗಳನ್ನು ದೋಚುತ್ತಿದ್ದಾನೆ. ಅಲ್ಲದೆ ವಸ್ತು ರೂಪದ ಹರಿಕೆಗಳಲ್ಲಿ ಚಿನ್ನ, ಬಂಗಾರ , ವೀಳ್ಯದ ಎಲೆ ಅಡಿಕೆ, ಬೆಳ್ಳಿ -ಬಂಗಾರದ ಕೊಳಲು ಹಾಗೂ ಬೆಳ್ಳಿಯ ಚಕ್ಕುಲಿಗಳನ್ನು ಸೇವೆಗೆ ತೆಗೆದುಕೊಂಡಿದ್ದಾನೆ ಎಂದು ಹೇಳಲಾಗಿದೆ. ಇಂತಹ ಪಾಪಿಯನ್ನು ಭೂಮಿಯಲ್ಲಿಯೇ ಇರಬಾರದೆಂದು ಜನ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಎರಡು ವರ್ಷದಲ್ಲಿ 60 ಲಕ್ಷದ ಹೊಸ ಫ್ಲಾಟ್, 40 ಲಕ್ಷದ ಹೊಸ ಕಾರು ಬಾರಿ ಬೆಲೆಯ 20 ಸೆಂಟ್ಸ್ ಜಾಗ ಖರೀದಿಸಿರುವುದಾಗಿ ತಿಳಿದು ಬಂದಿದೆ.



















