ನ್ಯೂಸ್ ನಾಟೌಟ್: ಈತನಿಗೆ ಸಮಾಜದಲ್ಲಿ ದೊಡ್ಡ ಹೆಸರಿತ್ತು. ಎದ್ದು ನಿಂತು ಪಾದ ತೊಳೆದು ಭಕ್ತರು ಈತನನ್ನು ಗೌರವಿಸುತ್ತಿದ್ದರು. ಸಾಕ್ಷಾತ್ ದೇವರೆಂದೇ ಆರಾಧಿಸುತ್ತಿದ್ದರು. ಆದರೆ ಈತ ಮಾತ್ರ ಎಲ್ಲರ ಮುಖಕ್ಕೆ ಬೂದಿ ಎರಚುತ್ತಿದ್ದ. ಒಳಗಿಂದೊಳಗೆ ಕಾಮದ ಆಟಕ್ಕೆ ಮುಗ್ದ ಮಕ್ಕಳನ್ನು ಬಲಿಯಾಗಿಸುತ್ತಿದ್ದ. ಅಂದ ಹಾಗೆ ನಾವು ಯಾರ ಬಗ್ಗೆ ಹೇಳುತ್ತಿದ್ದೇವೆ ಅನ್ನುವುದು ಇದೀಗ ನಿಮಗೆ ಗೊತ್ತಾಗಿರಬಹುದು.
ಯಸ್.. ಅವರು ಬೇರೆ ಯಾರೂ ಅಲ್ಲ, ವನ್ ಅಂಡ್ ಒನ್ಲಿ ಮುರುಘಾ ಮಠದ ಶಿವಮೂರ್ತಿ ಸ್ವಾಮೀಜಿ. ಅಂದ ಹಾಗೆ ಇವರನ್ನು ಇನ್ಮುಂದೆ ಸ್ವಾಮೀಜಿ ಅನ್ನುವ ಬದಲು ಶಿವಮೂರ್ತಿ ಅಂತ ಕರೆದ್ರೆ ತಪ್ಪಲ್ಲ. ಒಬ್ಬ ಸ್ವಾಮೀಜಿಗೆ ಇರಬೇಕಾದ ಯಾವ ಗೌರವ ಗುಣವೂ ಇವರಲ್ಲಿ ಇಲ್ಲ. ಏನೇ ಇರಲಿ ಈ ಶಿವಮೂರ್ತಿ ಮಠದೊಳಗೆ ನಡೆಸುತ್ತಿದ್ದ ಕಾಮಕಾಂಡ ಒಂದೆರಡಲ್ಲ. ಇದೀಗ ಒಂದೊಂದಾಗಿ ಬೆಳಕಿಗೆ ಬರುತ್ತಿದೆ.
ಮಕ್ಕಳನ್ನು ಬೆತ್ತಲಾಗಿಸುವುದು, ಅವರೊಂದಿಗೆ ಲೈಂಗಿಕ ಕ್ರಿಯೆ ನಡೆಸುವುದು, ಗರ್ಭವತಿಯಾದ್ರೆ ಗರ್ಭ ತೆಗಿಸುವುದು, ಹೀಗೆ ಈ ಸ್ವಾಮೀಜಿ ವಿರುದ್ಧ ಅನೇಕಾನೇಕ ದೂರುಗಳು ಕೇಳಿ ಬರುತ್ತಿವೆ. ಕಾವಿ ಬಟ್ಟೆ ತೊಟ್ಟುಕೊಂಡೇ ಮಾಡಬಾರದನ್ನೆಲ್ಲ ಮಾಡಿ ಇದೀಗ ಪೊಲೀಸರ ಅತಿಥಿಯಾಗಿರುವ ಶಿವಮೂರ್ತಿ ಖೆಡ್ಡಾಕ್ಕೆ ಬಿದ್ದಿದ್ದೇ ಒಂದು ರೋಚಕ ಕಥೆ. ಅಂದ ಹಾಗೆ ಈ ಕಾಮಿ ಸ್ವಾಮೀಜಿ ಸಿಕ್ಕಿ ಹಾಕಿಕೊಂಡಿದ್ದು ಹೇಗೆ? ಈ ರಶ್ಮಿ ಯಾರು? ಅನ್ನುವುದನ್ನು ಇಲ್ಲಿ ಎಳೆಎಳೆಯಾಗಿ ತೆರೆದಿಡುತ್ತಿದ್ದೇವೆ ಓದಿ..
ಚಿತ್ರ ದುರ್ಗದ ಮುರುಘಾ ಮಠ ರಾಜ್ಯದಲ್ಲಿ ಭಾರಿ ಹೆಸರು ಮಾಡಿದ ಮಠ, ಮುರುಘಾ ಮಠಕ್ಕೆ ಅದರದ್ದೇ ಆದ ಐತಿಹ್ಯವಿದೆ. ಶಿಕ್ಷಣ ಸೇರಿದಂತೆ ಬೇರೆ ಬೇರೆ ವಿಚಾರಕ್ಕೆ ಮುರುಘಾ ಮಠ ಜನಪ್ರಿಯ. ಲಿಂಗಾಯಿತ ಸಮುದಾಯ ಮಾತ್ರವಲ್ಲ, ಎಲ್ಲ ಸಮುದಾಯದ ಭಕ್ತರೂ ಮುರುಘಾ ಮಠಕ್ಕೆ ಭೇಟಿ ನೀಡುತ್ತಾರೆ. ಅಂತಹ ಶ್ರೇಷ್ಠ ಮಠಕ್ಕೆ ಶಿವಮೂರ್ತಿ ಸ್ವಾಮೀಜಿ ಸಣ್ಣ ವಯಸ್ಸಿನಲ್ಲಿಯೇ ಬಂದು ಸೇರಿಕೊಂಡರು. ಇವರ ಜತೆಗೆ ಬಸವರಾಜನ್ ಕೂಡ ಆರು ವರ್ಷದಲ್ಲಿ ಮಠಕ್ಕೆ ಸೇರಿಕೊಂಡ್ರು. ಹೀಗಾಗಿ ಶಿವಮೂರ್ತಿ ಹಾಗೂ ಬಸವರಾಜನ್ ಇಬ್ಬರು ಕೂಡ ಒಟ್ಟೊಟ್ಟಿಗೆ ಅಧ್ಯಯನ ನಡೆಸಿಕೊಂಡು ಬೆಳೆದ್ರು. ಇಬ್ಬರೂ ಕೂಡ ಈ ಹಿಂದೆ ಪೀಠಾಧಿಪತಿಯಾಗಿದ್ದ ಮುರುಘಾ ರಾಜೇಂದ್ರ ಶ್ರೀಗಳ ನೆಚ್ಚಿನ ಶಿಷ್ಯರಾಗಿದ್ದರು. ಮುಂದಿನ ಪೀಠಾಧಿಪತಿ ಯಾರು? ಎಂದು ಯೋಚಿಸುತ್ತಿದ್ದ ಮುರುಘಾ ರಾಜೇಂದ್ರ ಶ್ರೀಗಳಿಗೆ ಬಸವರಾಜು ಅವರನ್ನು ಪೀಠಕ್ಕೆ ಉತ್ತರಾಧಿಕಾರಿಯಾಗಿ ನೇಮಕ ಮಾಡುವ ಮನಸ್ಸಾಯಿತು. ಆದರೆ ಅದಕ್ಕೆ ಬಸವರಾಜನ್ ಒಪ್ಪದ ಕಾರಣಕ್ಕೆ ಮುರುಘಾ ಮಠಕ್ಕೆ ಶಿವಮೂರ್ತಿಯನ್ನು ಸ್ವಾಮೀಜಿಯಾಗಿ ನೇಮಿಸಲಾಯಿತು. ಬಸವರಾಜನ್ ಅವರನ್ನು ಮಠದ ಆಡಳಿತಾಧಿಕಾರಿಯಾಗಿ ನೇಮಿಸಲಾಯಿತು.

ಒಂದು ಹಂತದಲ್ಲಿ ಎಲ್ಲವೂ ಸರಿ ಇತ್ತು. ಇಬ್ಬರು ಪರಸ್ಪರ ಹೊಂದಾಣಿಕೆಯಲ್ಲಿ ಇದ್ದರು. ಆದರೆ ಮಠದ ಆದಾಯ ಹೆಚ್ಚುತ್ತಿದ್ದಂತೆ ಇಬ್ಬರ ನಡುವೆ ಒಳಜಗಳ ಶುರುವಾಯಿತು. ಈ ನಡುವೆ ಸ್ವಾಮೀಜಿ ಮಠದ ಹಾಸ್ಟೇಲ್ಗೆ ರಶ್ಮಿ ಎಂಬಾಕೆಯನ್ನು ವಾರ್ಡನ್ ಆಗಿ ನೇಮಿಸಿದ್ದರು. ಆಕೆಯನ್ನು ಶಿವ ಕುಮಾರ್ ತುಂಬಾ ನಂಬಿದ್ದರು ಕೂಡ. ಆಕೆ ಮಠದ ವಿದ್ಯಾರ್ಥಿನಿಯರನ್ನು ಸ್ವಾಮೀಜಿ ಕೊಠಡಿಗೆ ಸರತಿಯಂತೆ ಕಳುಹಿಸುತ್ತಿದ್ದಳು. ಈ ವೇಳೆ ಆಕೆ ಅದನ್ನು ವಿಡಿಯೋ ಕೂಡ ಮಾಡಿ ಸ್ವಾಮೀಜಿಗೆ ಗೊತ್ತಾಗದಂತೆ ಬಚ್ಚಿಟ್ಟಿದ್ದಳು. ಈ ವಿಡಿಯೋವನ್ನು ೫೦ ಲಕ್ಷ ರೂ.ಗೆ ಬಸವರಾಜನ್ ಗೆ ಈಕೆ ಮಾರಾಟ ಮಾಡಿದ್ದಾಳೆ ಅನ್ನುವ ಸ್ಫೋಟಕ ವಿಚಾರ ಇದೀಗ ಹೊರಬಿದ್ದಿದೆ, ಮಾತ್ರವಲ್ಲ ಇನ್ನೂ ಕೆಲವು ವಿಡಿಯೋಗಳನ್ನು ಹಲವರಿಗೆ ಹಣಕ್ಕೆ ನೀಡಿದ್ದಾಳೆ. ಸಿಕ್ಕಸಿಕ್ಕವರು ಈ ವಿಡಿಯೋ ಹಿಡಿದು ಸ್ವಾಮೀಜಿಯನ್ನು ಹೆದರಿಸಿ ಹಣ ಪೀಕಿಸುತ್ತಿದ್ದರು. ಲೈಂಗಿಕ ಕಿರುಕುಳದ ಬಗ್ಗೆ ಒಡನಾಡಿ ಸಂಸ್ಥೆ ಎದುರು ಮಕ್ಕಳೇ ಹೇಳಿದ್ದರಿಂದ ಬಸವರಾಜನ್ ಕೂಡ ಸ್ವಾಮೀಜಿಯಿಂದ ಹಣ ಪೀಕಿಸುವ ಪ್ಲಾನ್ ಗೆ ನಡೆಯಲಿಲ್ಲ. ಒಟ್ಟಿನಲ್ಲಿ ಸ್ವಾಮೀಜಿ ಕಾಮಕಾಂಡ ಈಗ ಇಡೀ ಮಾಧ್ಯಮಗಳಲ್ಲಿ ದಿನನಿತ್ಯ ಬರುತ್ತಿದೆ. ಇಂತಹ ಸ್ವಾಮೀಜಿಗೆ ಕಠಿಣ ಶಿಕ್ಷೆ ಕೊಡಿಸಿ ಸಮಾಜಕ್ಕೊಂದು ಒಳ್ಳೆಯ ಸಂದೇಶ ಸಿಗುವಂತೆ ಆಗಬೇಕೆಂದು ಜನ ಒತ್ತಾಯಿಸುತ್ತಿದ್ದಾರೆ.





















ಈತ ರಾಹುಲ್ ಗಾಂಧಿಯೊಂದಿಗೆ ಇರುವ ಫೋಟೋ ಮಾತ್ರ ಮಾರಿಕೊಂಡ ನಿಮಗೆ ಸಿಕ್ಕಿದ್ದಾ? ಅಮಿತ್ ಶಾ ಬಂದಿದ್ನಲ್ಲ, ಆತನೊಂದಿಗೆ ಇರೋ ಫೋಟೋ ಸಿಕ್ಕಿಲ್ವಾ ? ಕಳಿಸಲಾ?
plz see correct..nantra comment madbeku
Amit shah photo na yake hakilla??……..ooh mostly BJP inda paid promotion ansatte
sariyagi suddi nodi..photo nodi comment madi..
Shameless creature. Why is it he is still alive?. He should either end his life or resign as Mutt head, relieve himself from sanyasa and marry a lady and live like an ordinary citizen. Becoming a guru is not possible for all. Some get discharged themselves and lead a married life, like one of erstwhile guru of one of Udupi mutt and now living gracefully.
ಮೋಸ್ಟ್ಲಿ ಆಶ್ರಮ್ ಸಿರಿಯಲ್ ಗೆ ಇದು ಮಾದರಿ ಅನ್ಸುತ್ತೆ ಸೇಮ್ ಹೀಗೆ ಇರೋದು ಅದರಲ್ಲಿ
ಮುಂದೆ ಏನಾಗುತ್ತೋ ಕಾದು ನೋಡೋಣ
ವಿಲಾಸಿ ಜೀವನಾನ ಸ್ವಾಮಿಗಳಿಗೆ ಕೊಟ್ರೆ ಹೀಗೆ ಆಗೋದು
ಅನಾತರಿಗೆ ಬಡಮಕ್ಕಳಿಗೆ ಅನುಕೂಲ ಆಗ್ಲಿ ಅಂತ ಭಕ್ತಾಧಿಗಳು ಧಾನ ಧರ್ಮ ಮಾಡ್ತಾರೆ,ಇಂಥವರು ಇದನ್ನ ಯಾವ್ದುಕ್ಕೆಲ್ಲಾ ಉಪಯೋಗಿಸ್ಕೊಳ್ತಾರೆ ನೋಡಿ..
ತುಂಬಾ ಬೈಯಬೇಕು ಅನಿಸ್ತಿದೆ ಆದರೆ ಏನ್ ಮಾಡೋದು…
ಇಂಥವರಿಂದ ಎಲ್ಲರನ್ನೂ ಅನುಮಾನದಿಂದ ನೋಡೋ ಪರಿಸ್ಥಿತಿ ಬಂದಿದೆ.