ಮಡಿಕೇರಿ: ದಕ್ಷಿಣದ ಕಾಶ್ಮೀರ ಎಂದೇ ಕರೆಯುವ ಕೊಡಗಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ರಾಜಾಸೀಟ್ ವ್ಯಾಪ್ತಿಯ ಪರಿಸರದಲ್ಲಿ ಅಗ್ನಿ ಅವಘಡ ಸಂಭವಿಸಿದೆ.

ರಾಜಾಸೀಟ್ ನ ಕೆಳಭಾಗದಲ್ಲಿ ಹಾದು ಹೋಗಿರುವ ಮಂಗಳೂರು -ಮಡಿಕೇರಿ ಮುಖ್ಯ ರಸ್ತೆ ಕಡೆಯಿಂದ ಏಕಾಏಕಿ ಬೆಂಕಿ ಹಬ್ಬಿಕೊಂಡು ವೀವ್ ಪಾಯಿಂಟ್ ಸಮೀಪ ಅಂದಾಜು ಎರಡು ಎಕರೆಗೂ ಹೆಚ್ಚು ಕುರುಚಲು ಕಾಡು ಪ್ರದೇಶ ಬೆಂಕಿ ಕೆನ್ನಾಲಿಗೆಗೆ ಸುಟ್ಟು ಕರಕಲಾಗಿದೆ. ಅಗ್ನಿ ಶಾಮಕ ದಳದ ಸಿಬ್ಬಂದಿಗೆ ರಾಜಾಸೀಟ್ ಕೆಳಗೆ ಹೋಗುವುದಕ್ಕೆ ಸಾಧ್ಯವಾಗದೇ ಇದ್ದುದರಿಂದ ಹೂವಿನ ಗಿಡಗಳಿಗೆ ಬಳಸುವ ಪೈಪ್ ಬಳಸಿ ಬೆಂಕಿ ನಂದಿಸುವ ಕಾರ್ಯ ನಡೆಸಲಾಯಿತು.


















