ನ್ಯೂಸ್ ನಾಟೌಟ್ : ಕೆವಿಜಿ ಕಾನೂನು ಮಹಾವಿದ್ಯಾಲಯದ ಎನ್.ಎಸ್.ಎಸ್ ಘಟಕದ ವತಿಯಿಂದ ಜ.30 ರಂದು ಸ್ವಚ್ಛತಾ ಕಾರ್ಯಕ್ರಮ ನಡೆಯಿತು.

ಸ್ವಚ್ಛಭಾರತ ಗಾಂಧೀಜಿ ಕನಸು:
ಜ.30 ಮಹಾತ್ಮ ಗಾಂಧೀಜಿಯವರ ಪುಣ್ಯ ತಿಥಿಯ ದಿನ. ಹಾಗಾಗಿ ಆ ದಿನದಂದು ಕೆ.ವಿ.ಜಿ ಕಾನೂನು ಮಹಾವಿದ್ಯಾಲಯದ ಎನ್.ಎಸ್.ಎಸ್ ಘಟಕದ ವತಿಯಿಂದ ಸುಳ್ಯದ ನಗರ ಪಂಚಾಯತಿನ ಕರೆಯ ಮೇರೆಗೆ ಕಾಲೇಜಿನ ವಿದ್ಯಾರ್ಥಿಗಳು, ಅಧ್ಯಾಪಕ ಹಾಗೂ ಸಿಬ್ಬಂದಿ ವರ್ಗದವರು ಕಾಲೇಜಿನ ಆಸುಪಾಸಿನಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಮಾಡಿದರು. ಕಾಲೇಜಿನ ಎನ್.ಎನ್.ಎಸ್ ಘಟಕಾಧಿಕಾರಿ ರಂಜನ್. ಕೆ. ಎನ್ ಇದರ ನೇತೃತ್ವ ವಹಿಸಿದ್ದರು.


















